Monday, December 30, 2013

2013 .......ಡಿಸೆಂಬರ್ 31.... ಬೆಳಗಿನ 4 ಗಂಟೆಯ ಸಮಯ.....ನಿದ್ದೆ ಬಾರದೆ ಹಾಗೆ ಸುಮ್ಮನೆ ಹಿಂತಿರುಗಿ ನೋಡಿದಾಗ

2013 .......ನಿದ್ದೆ ಬಾರದೆ........ ಹಾಗೆ ಸುಮ್ಮನೆ ಹಿಂತಿರುಗಿದಾಗ.......

ಡಿಸೆಂಬರ್ 31

ಡಿಸೆಂಬರ್ ತಿಂಗಳಿಡೀ ಹೊಸ ಹೊಸ ಕನಸುಗಳು! ಹೊಸ ಪ್ರಯತ್ನಗಳು....ಪ್ರಯೋಗಗಳು.....

ಡಿಸೆಂಬರ್ 3
ಥಟ್ಟನೆ ತಟ್ಟಿದ ಬ್ಯುಕೋಸ್ಕಿ ಕವಿತೆಗಳು... ಅನುವಾದ

ನವಂಬರ್ 27
ಕವಿತೆ ಅನುವಾದ
ಬಿಳಿ ಕನಸು   
  
ನವಂಬರ್ 14
ನಿನ್ನೆ ಮದ್ಯಾಹ್ನ ಹುಬ್ಬಳ್ಳಿಯಲ್ಲಿದ್ದೆ. ಜನಶತಾಬ್ದಿಯಿಂದ ಹೊರಡಬೇಕಿತ್ತು.ಊರಿನಿಂದ ಬಸ್ ನಲ್ಲಿ ಬಂದು ಹುಬ್ಬಳ್ಳಿ ತಲುಪಿದಾಗ ಅದಾಗಲೇ ಮಧ್ಯಾಹ್ನ 1.45 ಗಂಟೆಯಾಗಿತ್ತು. ಊಟಕ್ಕೆ ಸಮಯವಿರಲಿಲ್ಲ. ಅಟೊ ಒಂದನ್ನು ಹತ್ತಿ ಅರ್ಜಂಟಾಗಿ ರೇಲ್ವೆ ನಿಲ್ದಾಣಕ್ಕೆ ಬಿಡು ಮಾರಾಯ ಅಂದೆ. ಅಷ್ಟರಲ್ಲೇ ಚೌಕಾಸಿಯೂ ನಡೆದಿತ್ತು ಛಾರ್ಜಿಗಾಗಿ! 40 ರೂಪಾಯಿ ಕೊಡಿ ಅಂದ. ಜಾಸ್ತಿ ಆಯ್ತಲ್ಲ ಮಾರಾಯಾ ಅಂದೆ. ಇಲ್ಲಾ ಸಾರ್ ಎಲ್ಲಾ ತುಟ್ಟಿಯಾಗಿದೆ. ನಿಮಗೇ ಗೊತ್ತಲ್ಲಾ ಅಂದ. ಸರಿನಪಾ ಹೊರದು ಅಂತಂದೆ. ಚೆನ್ನಮ್ಮನ ಸರ್ಕಲ್ ಬರುತ್ತಿದ್ದಂತೆ ಹೊಟ್ಟೆ ಚುರುಗುಡುತ್ತಿತ್ತು. ಸ್ವಲ್ಪ ನಿಲ್ಸು ಮಾರಾಯಾ.. ಸ್ಟೇಶನ್ ಮುಟ್ಟೋದ್ರೊಳಗೆ ಏನಾದ್ರೂ ಸ್ವಲ್ಪ ತಿಂತಾನೆ ಹೋಗೊಣ ಅಂತಂದೆ. ನಿಲ್ಲಿಸಿದ. ಓಡಿಹೋಗಿ ಒಂದ್ ಚಿಪ್ಸ್ ಪಾಕೀಟು ಮತ್ತು ತಂಪು ಪಾನೀಯ ತಗೊಂಡ್ ಬಂದು ಕುಳಿತೆ. ಐದೇ ನಿಮಿಷದಲ್ಲಿ ಹಬ್ಬಳ್ಳಿ-ಧಾರವಾಡದ ಹವಾ, ತುಟ್ಟಿಯಾಗುತ್ತಿರುವ ಕಾಲ, ಸುಧಾರಿಸಿದ ರೇಲ್ವೆ ನಿಲ್ದಾಣ, ಜಗತ್ತು... ಜನ... ಜನಾರ್ಧನ... ಎಲ್ಲ ನಮ್ಮ ಮಾತಿನಲ್ಲಿ ಬಂದು ಹೋದರು! ಸ್ಟೇಶನ್ ತಲುಪಿದಾಗ ರೈಲು ಇನ್ನೂ ಬಂದಿಲ್ಲ ಎಂದು ತನ್ನ ಕಾಮನ್ ಸೆನ್ಸ್ ಉಪಯೋಗಿಸಿ ಆತನೇ ಹೇಳಿದ. ಹಾಗಾದ್ರೆ ಒಂದೈದು ನಿಮಿಷ ಇಲ್ಲೆ ಕೂತ್ಕೊಂಡು ತಿಂಡಿ ತಿಂದು ಮುಗಿಸಿ ಎಂದೂ ಆತ್ಮೀಯವಾಗಿ ಹೇಳಿದ! ಕೆಲವೇ ನಿಮಿಷಗಳ ಒಡನಾಟದಲ್ಲಿ ಆ ಅಟೋಮಾಮ ಹತ್ತಿರದವನೆನಿಸಿಬಿಟ್ಟಿದ್ದ. ಇದು ಬಹುಷಃ ಹುಬ್ಬಳ್ಳಿ-ಧಾರವಾಡದ ಮಣ್ಣಿನ ಗುಣ. ಜನ ಡೌನ್ ಟು ಅರ್ಥ್ ಇರ್ತಾರಿಲ್ಲಿ. ಕೆಲ ನಿಮಿಷಗಳಲ್ಲಿ ಆತ ಹೇಳಿದಂತೆ ರೈಲು ಬಂತು. ಪುಟ್ಟ ಶಿಶುವನ್ನು ಹೊತ್ತ ತಾಯಿಯೊಬ್ಬಳು ಉರಿಬಿಸಿಲಿನಲ್ಲಿ ನಡೆದು ಬರುತ್ತಿದ್ದಳು. ಅಟೋ ಮಾಮಾನ ಹತ್ತಿರ ಚೌಕಾಸಿ ಮಾಡತೊಡಗಿದಳು. ಯಾಕೋ ಚೌಕಾಸಿ ಮಾಡತೀಯಾ. ಮಗು ಇದೆ. ಕರ್ಕೊಂಡ್ ಹೋಗೋ ಮಾರಾಯ ಅಂದಾಗ, ಆಯ್ತು ಸಾರ್, ನಿಮ್ಮಂಥೋರು ಬಾಳ ಅಪರೂಪಕ್ಕೆ ಸಿಗತಾರೆ. ಬರ್ತೀನಿ ಸಾರ್ ಅಂತಂದು ತನ್ನ ಡ್ಯೂಟಿಗೆ ತಾ ಹೋದ. ಹುಬ್ಬಳ್ಳಿ-ಧಾರವಾಡದ ಘಮವನ್ನು, ಆರದ ನೆನಪುಗಳ ಸುರುಳಿಯನ್ನು ಬಿಚ್ಚುತ್ತ ನಾನೂ ರೈಲಿನ ಚುಕುಬುಕು ಲಯದೊಳಗೆ ಲಯವಾಗತೊಡಗಿದೆ.

ನವಂಬರ್ 7
ಫೇಸ್ ಬುಕ್ ನ https://www.facebook.com/groups/620733744617797/ ನಲ್ಲಿ ಮ್ಯೂಸಿಕಲ್ ಸಾಗಾ ಬರವಣಿಗೆ ಆರಂಭ

ನವಂಬರ್ 4
A warm get together 

ಅಕ್ಟೋಬರ್ 22
ನಿನಾಸಂ ಈ ವರ್ಷದ ತಿರುಗಾಟ ನಾಟಕ 'ಗಾಂಧಿ ವರ್ಸಸ್ ಗಾಂಧಿ' ನಾಟಕ ನೋಡಿದೆ. ಬಹಳ ದಿನಗಳ ನಂತರ ಒಂದು ಕಾಡುವ ನಾಟಕ ನೋಡಿದ ಅನುಭವ. ಭೀಮಸೇನ ಜೋಶಿಯವರ ದರಬಾರಿ ಕಾನಡಾ ರಾಗದಂತೆ! ಮನಸ್ಸಿಗೆ ನೇರವಾಗಿ ನಾಟುವ ಸಂಭಾಷಣೆಗಳು. ನಾಟಕಕಾರ ಅಜಿತ್ ದಳವಾಯಿ ರಚಿಸಿದ ಈ ಕೃತಿಯನ್ನು ಶ್ರೀ ಡಿ.ಎಸ್.ಚೌಗಲೆ ಅವರು ಮನೋಜ್ಞವಾಗಿ ಕನ್ನಡೀಕರಿಸಿದ್ದಾರೆ. ಎಂ ಗಣೇಶ್ ಅವರ ನಿರ್ದೇಶನವೂ ತುಂಬ ಪವರ್ ಫುಲ್. ಈ ಸಾರಿಯ ತಿರುಗಾಟ ತಂಡದಲ್ಲಿರುವ ಉತ್ತಮ ನಟರ ಪರಿಣಾಮಕಾರಿ ಅಭಿವ್ಯಕ್ತಿ ಕೂಡ ವಿಶೇಷ ಮೆರಗನ್ನು ಪಡೆದು ನಾಟಕ ಕಳೆಕಟ್ಟುತ್ತದೆ. ನಿನ್ನೆ ರಾತ್ರಿಯಿಡೀ ನನ್ನೊಳಗಣ ಗಾಂಧಿ....ಹರಿಲಾಲ...ಕಸ್ತೂರ್ಬಾ.... ಸಂವಾದಕ್ಕೆಳೆಸಿದ್ದರಲ್ಲದೇ ಈಗಲೂ ಒಳಗೆ ತುಮುಲಿಸುತ್ತಿದ್ದಾರೆ! ಇನ್ನೂ ಹ್ಯಾಂಗ್ಓವರ್ ನಿಂದ ಹೊರಬರಲಾಗುತ್ತಿಲ್ಲ. ಉತ್ತಮ ನಾಟಕವೊಂದನ್ನು ತೋರಿಸಿದ ಗೆಳೆಯ ಉಗಮ ಶ್ರೀನಿವಾಸ್ ಮತ್ತವರ ಝೆನ್ ಟೀಮಿಗೆ ಶಹಬ್ಬಾಸ್! ನಿಮ್ಮೂರಿಗೆ ಈ ಸಲದ ನಿನಾಸಂ ತಿರುಗಾಟ ನಾಟಕಗಳು ಬಂದರೆ ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳದೇ ನೋಡಿ.

ಅಕ್ಟೋಬರ್ 18-20
ಮೈಸೂರು ZOO News! 
All are in sleeping mode!






ಅಕ್ಟೋಬರ್ 11
Recently I had an opportunity to participate in a religious ritual called 'Gondal'. It is a commonly practiced ritual in Maharastra where Parashurama's story is narrated. Some time the narrator explains Tulaja Bhavani's story also! Wonderful experience during the fire dance!

 ಸಪ್ಟೆಂಬರ್ 30
Still in the hangover!.... goonja rahee.....Sangeet jagat me..... mesmerizing singing of raag Nat Bhairav byPt.Ganapati Bhat hasanagi at Kundgol Sawai Gadharva festival this morning! (30-9-2013)



ಸಪ್ಟೆಂಬರ್ 24
I learnt to ride bicycle before I was 10 years. Learnt to ride two -wheeler in teens. Drive four -wheeler in twenties. Now in my middle age, for the first time I tried two balance between eight wheels and successful in the very first attempt. I started learning scatting along with my eight year old son. He is my coach!





ಸೆಪ್ಟೆಂಬರ್ 20
It was a memorable day. After a gap of few days I have conducted a workshop on translation for the students of Post Graduate English Literature, Department of Studies and Research in English, Tumkur University. I really forgot myself about 4 and half continuous hours! The response from the students was also immensely influenced me! They are really talented and reaffirmed my belief that today's youth are more creative and energetic. If they could get a proper training they can achieve wonders. I sincerely thank Dr. H K Shivalinga Swamy, the Chairman of the Department and his young scholarly team of professors, for providing this great opportunity to share my little knowledge with the young friends and to be one along with them.



ಅಗಸ್ಟ್ 15,
@ my native. Been to Sri Raj Rajeshwari High School, Manchikeri, where I did my middle schooling. Remembered Sri N Jayappa.... PE teacher....who used to train us for 2-3 kilometers long Prabhat Pheri and Pheri Songs! Sri.G.K.Hegde...our English teacher....who encouraged us to participate in extracurricular activities.....They were real dedicated teachers! 24X7 gurus! A big Salute to them!


ಅಗಸ್ಟ್ 2-12,
At ARishikesh on the banks of holy river Ganga! It is simply wonderful! No words to utter! Sublime!  It was raining today in Rishikesh! It was like listening to Sur Malhar......
The Vibrant Ganga Arati @ Haridwar. It is a daily event where lakhs of people witness the spellbinding event on the banks of river Ganga
Nature's Paintings through wonder eyes! (46 photos)
Some clicks on the way towards Tehri...The Tehri Dam is the highest dam in India and one of the tallest in the world...... The backwaters go more than 70kms.... Height     260.5 m (855 ft), Length        575 m (1,886 ft)..... And the water stored is almost 815 feet. Ganga has swallowed many mountains! Rishikesh and Haridwar are saved just because of this dam during the last month's calamity!












ಜುಲೈ 14
ಬೆಳಕು ಮೂಡಿತು....ಮಸುಕು ಸರಿಯಿತು... ಹಲವಾರು ವರ್ಷಗಳ ನಂತರ ಹಗುರಾಗಿ! ಮನಸ ಹಕ್ಕಿ ರಕ್ಕೆಬಿಚ್ಚಿ ಮತ್ತೆ ಹಾರಿತು....

ಮೇ 30,

ಕುವೆಂಪು ಸಾರ್ವಕಾಲಿಕ ಸತ್ಯವನ್ನು ಸಾಹಿತ್ಯದಲ್ಲಿ ತೋರಿದ ದಾರ್ಶನಿಕ. ಅವರ ಮಲೆಗಳಲ್ಲಿ ಮದುಮಗಳು ನಾಟಕರೂಪವನ್ನು ಬೆಳಗಿನ 6 ಗಂಟೆಯವರೆಗೂ ನೋಡಿ ಮನದುಂಬಿಕೊಂಡು ಬಂದಿದ್ದೇನೆ. ರಾತ್ರಿ 8.30ಗೆ ಶುರುವಾದ ನಾಟಕ ಪ್ರಾರಂಭದಿಂದ ಅಂತ್ಯದವರೆಗೂ ಒಂದೇ ಒಂದು ನಿದ್ದೆಯ ಜೊಂಪೂ ಬಾರದಂತೆ ಹಿಡಿದಿಟ್ಟ ಪರಿ ಅನನ್ಯವಾದದ್ದು. ಪ್ರಾರಂಭದಿಂದ ಅಂತ್ಯದವರೆಗೂ ಅದೇ ಆಸಕ್ತಿ ಕುತೂಹಲಗಳನ್ನು ಉಳಿಸಿಕೊಂಡು ಬರುವಲ್ಲಿ ರಂಗರೂಪ ತುಂಬ ಯಶಸ್ವಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಬಸವಲಿಂಗಯ್ಯ, ಕೆ.ವಿ.ನಾರಾಯಣಸ್ವಾಮಿ, ಹಂಸಲೇಖ ಹಾಗೂ ಅವರ ತಂಡದ ಎಲ್ಲಾ ಸದಸ್ಯರಿಗೂ ಹೃತ್ಪೂರ್ವಕ ವಂದನೆಗಳು. ಮನಮುಟ್ಟುವ ಸಂಭಾಷಣೆಗಳು, ಅಷ್ಟೇ ಸಮರ್ಥವಾಗಿ ಅದನ್ನು ನಿರೂಪಿಸಿದ ನಟರು, ಒಳ್ಳೆಯ ಸಂಗೀತ ಹಾಗೂ ನಾಲ್ಕು ವಿವಿಧ ರಂಗಸ್ಥಳಗಳಲ್ಲಿ ಮೂಡಿಬಂದ ಮದುಮಗಳು ಮುದನೀಡಿದ್ದಾಳೆ. ಒಂದೇ ಒಂದು ಸಂಭಾಷಣೆಯೂ ಇಲ್ಲದೇ ಪ್ರಾರಂಭದಿಂದ ಅಂತ್ಯದವರೆಗೂ ತುಂಬ ಚಟುವಟಿಕೆಯಿಂದ ಗಮನಸೆಳೆದ ಗುತ್ತಿನಾಯಿ(ಅದರ ಪಾತ್ರ ಮಾಡಿದ ನಟನ ಅದ್ಭುತ ಸಾಮರ್ಥ್ಯಕ್ಕೆ ಹ್ಯಾಟ್ಸ್ ಆಫ್!) ಗುತ್ತಿ, ಐತ ಮತ್ತು ಪೀಂಚಲು, ಸುಬ್ಬಣ್ಣ ಹೆಗಡೆ, ದೇವಯ್ಯ ಬೇರೊಂದು ರೀತಿಯ ಲೋಕವನ್ನೇ ತೆರೆದಿಟ್ಟು ಕಾದಂಬರಿಯನ್ನು ಓದುವಾಗಿನದಕ್ಕಿಂತ ಭಿನ್ನವಾದ ಅನುಭವದ ಲೋಕಕ್ಕೆ ಕರೆದೊಯ್ಯುತ್ತಾರೆ. ಒಳ್ಳೆಯ ರಸಾಸ್ವಾದ ನೀಡಿದ ಎಲ್ಲ ಕಲಾವಿದರಿಗೂ ವಂದನೆಗಳು.

ಎಪ್ರಿಲ್ 25,

Monkey and Me.... Hand in hand!
This afternoon a monkey came and stood before the window of my house and started expressing hunger and thrust! About half an hour he was with me and ate stomach full of papaya and went away with a smiley face!





ಜನವರಿ 26,

ಅಜ್ಜ, ಮೊಮ್ಮಗ,..... ಸಂತಸದ ನಡಿಗೆ ಜತೆಗೆ ವಸಂತ!


ಜನವರಿ 24,

 ಫೇಸ್ ಬುಕ್ ನಲ್ಲಿ ಕಂಡ ಮುಖಗಳು.....ಕೃಪೆ: ಶಿವಾನಂದ ಹೆಗಡೆ, ಕೆರೆಮನೆ

ಆದಿನ ನಾವು ಕೆರೆಮನೆ ಮಹಾಬಲ ಹೆಗಡೆಯವರ ಮನೆಗೆ ಹೋಗಿದ್ದಾಗ ನಮ್ಮನ್ನು ಸ್ವಾಗತಿಸಿದ್ದು ತುಂಡು ಪಂಚೆಯುಟ್ಟು ಸಗಣಿಗೊಬ್ಬರವನ್ನು ಅಡಿಕೆ ಗಿಡಗಳಿಗೆ ಸೋಕುತ್ತಿದ್ದ ಮಹಾಬಲರು! ತುಂಬಾ ತಮಾಶೆಯ ಸ್ವಭಾವದವರಾಗಿದ್ದ ಅವರು "ರಾಷ್ಟ್ರ ಪ್ರಶಸ್ತಿ ವಿಜೇತಾ ಸಗಣೀ ಬಾಲ್ಡೀ ಎಳೇತಾ" ಎಂದು ಹೇಳಿದ ಮಾತು ಇನ್ನೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ! ಅಪಾರವಾದ ಜೀವನ ಶ್ರದ್ಧೆ, ಪ್ರೀತಿ, ವಿಶ್ವಾಸ,ಗೌರವ ಮುಂತಾದ ಎಲ್ಲದರ ಮೂರ್ತರೂಪವಾಗಿದ್ದ ಮಹಾಬಲರು ಹೆಸರಿಗೆ ಅನ್ವರ್ಥಕವಾಗಿ ಜೀವಿಸಿದವರು. 'ಗುಣವಜ್ಜನ ಸಂಸರ್ಗಾತ್ ಯಾತಿ ನೀಚೋಪಿ ಗೌರವಂ' ಎಂಬಂತೆ ಅನೇಕ ಗುಣೀಜನರ ಸಾನ್ನಿಧ್ಯದಿಂದಾಗಿ ನನ್ನಂತವರಿಗೂ ಮಹಾಬಲ ಹೆಗಡೆಯವರಂತವರ ಸಹವಾಸ, ಸಾನ್ನಿಧ್ಯ, ಒಡನಾಟ ಸಿಕ್ಕಿದ್ದು ಅವಿಸ್ಮರಣೀಯ ಅನುಭವ.




ಥಟ್ಟನೆ ತಟ್ಟಿದ ಬ್ಯುಕೋಸ್ಕಿ ಕವಿತೆಗಳು

I was touched and moved by a poem posted on one of my friends' wall yesterday afternoon. It haunted me like anything. I had requested that friend who is an ultimate fan of Gazal Samrat Mirza Galib, whom I love most, to provide the contact of the poet. That's how I came into contact with Albert Alexander Bukoski, an American poet. He is a peculiar kind of writer! He says he writes poetry for the sake of pleasure of writing! Never published his poems anywhere else apart from his page (https://www.facebook.com/AlbertsPoetryBooks) I have decided to translate his poems into Kannada and got his permission immediately. My sincere thanks to poet Mr. Albert Alexander Bukoski and also my friend who doesn't want to disclose identity, for their loving support.- Vasant

ತಪ್ಪಾಯಿತೆ ಅಷ್ಟೊಂದು ನಂದು?

ನನ್ನ ನೆನಪುಗಳಲ್ಲಿ ಅಚ್ಚೊತ್ತಿದೆ,
ಬಂಗಾರದಂತಹ ಪ್ರೀತಿ ನೀಡಲು ಮೋಹದ ಮೃದುಗಾಳಿ
ಮೆಲುವಾಗಿ ಬೀಸುತ್ತ ಒಬ್ಬಂಟಿ,
ನನ್ನಿಂದ ಬಲುದೂರ,
ನನ್ನ ಸಮಾಧಾನಕ್ಕೆಳೆಸುವ ಯತ್ನ.
ಮೌನ,
ಸಾಕಾಗಿದೆ ನನಗೆ ಮಾತು, ಪ್ಲೀಸ್...

ದೂರ.. ಬಲು ದೂ....ರ
ಇದ್ದರೂ ನೀ ಹತ್ತಿರವಿದ್ದಂತೆ ನನಗೆ,
ಅದಕೆಂದೆ ನೀನಿಂದು ಬರಲಾರೆ ನನ್ನಲ್ಲಿಗೆ,
ನೆಲೆಸಿರುವೆ ನನ್ನ ಹೃದಯಾಂತರಾಳದಲಿ,
ಅದು ಕೇವಲ ನಾನು.

ಕನಸಿನೆಡೆಗೆ ಚಲಿಸುತ್ತ,
ನಮ್ಮ ಜೋಡಿಯಾಗಿಸುವ,
ಅದು ಆಗುವಂತೆ ಕಾಣುವುದಿಲ್ಲ,
ನೀನು ನನ್ನದೆಯ ಖನಿಯಾಗಬಯಸುವೆಯಲ್ಲ

ಮಾಡಿದ್ದೇನು ನೀನು? ದೂರ ಸರಿದದ್ದು
ಒಲವು ಮತ್ತೆನ್ನ ಹೃದಯದಿಂದ ದೂರ,
ತುಂಬ ಹತ್ತಿರಿದ್ದೆವು ನಾವು ಒಮ್ಮೆ,
ಎಷ್ಟೊಂದು ದೂರಸರಿದಂತನ್ನಿಸಿದೆ ಈಗ,

ಬಯಸಿದ್ದೆಯಾ ನೀಯೆನ್ನ?
ನನಗದು ಅರ್ಥವಾಗಲೆ ಇಲ್ಲ
ನಾನಂದುಕೊಂಡಿದ್ದು ನಾವು,
ನಾ ನೋಡಿದ್ದು,
ಕೈಯೊಳಗೆ ಕೈಯಿಟ್ಟು ಜತೆಯಲ್ಲಿ ಪಯಣಿಸುವೆವೆಂದು:

ನಾನಿನ್ನ ಮುಖ್ಯಪ್ರಾಣ ಆಗಬಹುದೆಂದುಕೊಂಡಿದ್ದೆ.
ತಪ್ಪಾಯಿತೆ ಅಷ್ಟೊಂದು ನಂದು?
ನೋವಿನ ರಾಗ ನುಡಿಸುವುದ ಕೇಳುತ್ತಿದ್ದೇನೀಗ,
ಘನಘೋರ ಹಾಡನ್ನು ನಾ ಹಾಡುವೆ.

************

ಪ್ರಿಯ ಗುಲಾಬಿ,

ನೀನು ಬೆಳೆದ ನನ್ನ ಚೆಂಗುಲಾಬಿ
ಲೋಕದಲ್ಲಿ ನಾನೀಗ ಯಾರನ್ನ ಕೂಗಿ ಕರೆಯಲಿ?
ಯಾರಿಗೂ ಗೊತ್ತಿರದ ಗುಲಾಬಿ ಎಂದಿಗೂ
ಉನ್ಮಾದದಿಂದ ಹೊರಟೇ ಹೋಗಿರುವಾಗ.
ಓ ನನ್ನೊಲವೆ, ನಾನೊಂದು ಹೂದೋಟ.
ನೀ ನನ್ನ ಚೆಂದನ್ನೆ ಅಲರು
ಓ ನನ್ನ ಪ್ರಿತಿ, ನಾನೊಂದು ಕೈತೋಟ
ನೀ ನನ್ನ ಚೆಂದುಳ್ಳಿ ಚೆಲುವೆ ಹೂವು.

ಗೊತ್ತಿಲ್ಲ ಯಾರಿಗೂ ಅದರ ಸ್ಪರ್ಶರಸರೂಪ,
ದಿನ ಕಳೆದಂತೆ,
ನಿಜವಾದ ಪಕಳೆಯುದುರುವ ಭಾವದ ಬದುಕು
ದೂರವಾಗದು ಅದೆಂದೂ.

ನನ್ನ ಉತ್ಕಟ ಚಡಪಡಿಕೆಗೆ
ಮೃದು ಮಧುರ ಪ್ರೀತಿಯ ಉಸಿರು ಹೋಗಿದೆ
ನನ್ನದೆನ್ನುವ ಒಂದು ಬಂಧ
ಬೆಳಗಿಂದ ಬೈಗಿನವರೆಗೆ ಪ್ರೀತಿಯಿಂಧಲೆ ನಡೆಸಿದ್ದು,
ಮತ್ತದನ್ನೂ ಮೀರಿದ್ದು.

ಏನಾಗಬಹುದಿತ್ತು?
ಹಂಚಿಕೊಳ್ಳಬಹುದಿತ್ತು ಏನೆಲ್ಲವ ನಾವು?
ತಿಳಿಯಲಾರದು ಎಂದಿಗೂ
ನೀನು ಬೆಳೆದಿರಲೇ ಇಲ್ಲ ಅಷ್ಟು.

ದೇವರೇಕೆ ಕೊಡುತ್ತಾನೆ, ಮತ್ತೆ ಕಿತ್ತುಕೊಳ್ಳುತ್ತಾನೆ?
ಇಷ್ಟೊಂದು ಬೇಗನೆ ಗುಲಾಬಿ ಕಿತ್ತೊಯ್ದದ್ದು ಅವನಾಗಿರಲಿಲ್ಲ,
ನೀನು ಹೋದಂತೆಲ್ಲ, ನನ್ನೆದೆಯನ್ನು ಇನ್ನೊಂದು ದಸಿಯಿರಿದಿತ್ತು
ನನ್ನ ಪಾಲಿನ ಸೂರ್ಯ, ಗಾಳಿ, ಭೂಮಿ,ಚಂದ್ರ ಎಲ್ಲವೂ ನೀನೆ ಆಗಿರುವಾಗ.

ಚೆಲುವು ನೀನು,
ಮಧುರತೆಯು ನೀನು,
ಮುಗ್ಧೆ ನೀನು,
ಮೃದು ಮತ್ತೆ ಪ್ರೀತಿ ತುಂಬಿದ ಕೊಡ ನೀನು,
ನಾನು, ನೀನು.....

ವಿಶ್ರಮಿಸು ಪ್ರಿಯ ಗುಲಾಬಿ,
ನೀನೆನ್ನ ಪ್ರಾಣ,
ಒಲವಿನ ಗುಲಾಬಿ, ನನ್ನ ದೇಹದ ಪ್ರತಿ ಅಂಗ
ಈಗಲೂ ನನ್ನೊಂದಿಗಿವೆ ಬೆಚ್ಚನೆಯ ಸ್ಪರ್ಶದೊಡನೆ.
ನನ್ನೊಲವೆ, ನಾನು ಹೂದೋಟ,
ನೀ ನನ್ನ ಚೆಂದನೆಯ ಪುಷ್ಪರಾಗ
ಎಷ್ಟೊಂದು ಅಕ್ಕರೆ ಆರೈಕೆಗಳ ನಾ ನೀಡೆ
ನೀನು, ಚೆಂಗುಲಾಬಿ, ಮುಗ್ಧೆ, ಶುದ್ಧೆ...
ಅಂದದಾ ಹೂವುಗಳು, ಹೊಂದಲಾರವೇ ಎಂದಿಗೂ ಬೆಳೆಯುವಾ ಅವಕಾಶ.

******

ನಟ್ಟನಡು ಇರುಳಲ್ಲಿ ಅವಲೋಕಿಸು ಬಾ ಸಾವೆ,

ನಟ್ಟನಡು ಇರುಳಲ್ಲಿ ಅವಲೋಕಿಸು ಬಾ ಸಾವೆ,
ಬಾಚಿಕೋ ನಿನ್ನ ಕೈಗಳಿಂದ,
ಹೆದರಿ ಓಡುವ ಹೇಡಿಯಂತೆ ಸಾಯುವ ಬದಲು
ಸಮರಯೋಧನ ಹಾಗೆ ಒಂದೆಗುಕ್ಕಿಗೆ
ಸಾಯುವುದು ಲೇಸು.

ಮಧ್ಯರಾತ್ರಿಯ ಚಂದ್ರ ಎತ್ತರಕ್ಕೇರುವ ಮೊದಲು ಬಾ,
ಶಕ್ತಿಜ್ವಾಲೆಯ ಕಾಣುತ್ತದೆ ಅನಂತಲೋಕ,
ಕನಸುಗಳು ಬಿಟ್ಟುಕೊಡುತ್ತವೆ ಇಲ್ಲಾ ಹೋರಾಡುತ್ತವೆ,
ಈಗಲೇ ಜಾಗ ಖಾಲಿಮಾಡು ಇಲ್ಲಾ ಮುನ್ನುಗ್ಗು ಪೂರ್ಣ.

ಕನಸೊಂದು ತುಂಬಿದ ಯೋಧನೊಬ್ಬ,
ಎತ್ತರಕ್ಕೇರುವ ಹಂಬಲದಿ ಜಯಿಸುತ್ತಾನೆ ಭೂಪ,
ಸಾಯುತ್ತೇನೆ ನಾನು ಖಂಡಿತವಾಗಿ,
ಕನಸಗುರಿ ಮುಟ್ಟದೆ ಮತ್ತೆ ಬಿದ್ದು
ಹೇಡಿಯಂತೆ ಸಾಯುವ ಬದಲು
ಸುಟ್ಟುಬಿಡಿ ನನ್ನನ್ನು...
ಮತ್ತು ತೇಲಿಬಿಡಿ ಬಂಗಾರದ ಹರಿದೊರೆಯಲಿ



ಇಂಗ್ಲಿಷ್ ಮೂಲ: ಆಲ್ಬರ್ಟ್ ಅಲೆಕ್ಸಾಂಡರ್ ಬ್ಯುಕೋಸ್ಕಿ
(https://www.facebook.com/AlbertsPoetryBooks)

ಅನು : ವಸಂತ (3-12-2013)

ಬಿಳಿ ಕನಸು

An effort to translate three poems of Robert Friend into Kannada.

Robert Friend (November 25, 1913 - January 12, 1998) was an American-born poet and translator. After moving to Israel, he became a professor of English literature at the Hebrew University of Jerusalem. (http://en.wikipedia.org/wiki/Robert_Friend)


ಬಿಳಿ ಕನಸು

ಕ್ರೂರ ಸುದ್ದಿ ಕೇಳಿ
ಭಯಾನಕ ಆಕ್ರಮಣವನ್ನನುಭವಿಸಿದ ಮೇಲೆ,
ವಿಲಕ್ಷಣವೆಂಬಂತೆ ಭಯರಹಿತನಾದೆ,
ಪ್ರತಿ ಹಗಲು ಮೃದು ದಿಂಬಿನೊಳಗೆ ಮುಖವಿರಿಸಿ ಮುಳುಗುತ್ತ
ಮಗುವೊಂದು ಸುಖವಾದ ನಸುನಿದ್ದೆಯಲಿ ತೇಲಿಹೋದಂತೆ ಸಂತಸಪಟ್ಟೆ
ಪ್ರಾಯಶಃ ಅದೊಂದು ನಿಜವಾದ ವಿರಕ್ತಿ.
ಅರಿವಿತ್ತು ನನಗೆ ಬೇಷರತ್ತಾದ ಶಾಂತಿ ಅದೆಂದು
ಗೊತ್ತಿತ್ತು ಕೊನೆಗೆ ಬರಬಹುದು ನೋವು.
ಬರಲಿ ಅದು.
ನನ್ನ ದಿಂಬಿನ ಮೇಲೆ ಮುಖಹೊರಳಿಸಿ
ಮತ್ತೆ ಮಗದೊಂದು
ಬಿಳಿ(ಹಗಲು) ಕನಸಿನಲಿ ಮುಳುಗಿದ್ದೆ. 


ವಸಂತ
ನವಂಬರ್ 27,2013